ತೆಕ್ಕಟ್ಟೆ ಹಯಗ್ರೀವ ಕಲಾಮಂಟಪದಲ್ಲಿ ``ರುಕ್ಮಿಣಿ ಸ್ವಯಂವರ`` ಯಕ್ಷಗಾನ ಪ್ರದರ್ಶನ
ಲೇಖಕರು : ಕೋಟ ಸುದರ್ಶನ ಉರಾಳ
ಭಾನುವಾರ, ಡಿಸೆ೦ಬರ್ 27 , 2015
|
ಡಿಸೆ೦ಬರ್ 27, 2015
|
ತೆಕ್ಕಟ್ಟೆ ಹಯಗ್ರೀವ ಕಲಾಮಂಟಪದಲ್ಲಿ ``ರುಕ್ಮಿಣಿ ಸ್ವಯಂವರ`` ಯಕ್ಷಗಾನ ಪ್ರದರ್ಶನ
ತೆಕ್ಕಟ್ಟೆ :
24-12-2014 ರಂದು ತೆಕ್ಕಟ್ಟೆಯ ಹಯಗ್ರೀವ ಕಲಾಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇವರ ಚಂದ್ರಕಲಾ ಯಕ್ಷೊತ್ಸವ ಸರಣಿ ಕಾರ್ಯಕ್ರಮದ ಸಂದರ್ಭ ಸಾಹಿತಿ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀಯುತರು ಯಕ್ಷಗಾನವನ್ನು ಮೂಲರೂಪಕ್ಕೆ ಚ್ಯುತಿ ಬಾರದಂತೆ ಉಳಿಸಿಕೊಳ್ಳುವ ಬಗೆಗೆ ಹಿರಿಯ ಕಲಾವಿದರೆಲ್ಲರೂ ಭೇದ ಮರೆತು ಒಂದಾಗಬೇಕೆಂದು ಕರೆಕೊಟ್ಟರು. ಹೊಸ ತಲೆಮಾರಿನ ಯುವ ಜನಾಂಗ ಯಕ್ಷಗಾನವನ್ನು ಪ್ರೀತಿಸುತ್ತಾ ಅದನ್ನು ವಿರೂಪಗೊಳಿಸುತ್ತಿರುವುದರ ಬಗೆಗೆ ಖೇದವನ್ನು ವ್ಯಕ್ತ ಪಡಿಸಿದರು. ಯಶಸ್ವಿ ಕಲಾವೃಂದದಂತಹ ಸಂಸ್ಥೆಗಳು ನಿಸ್ವಾರ್ಥದಿಂದ ಅದರ ಉಳಿಯುವಿಕೆಗಾಗಿ ಹೋರಾಡುತ್ತಿರುವ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದರು.
ಶ್ರೀಯುತರನ್ನು ಸನ್ಮಾನಿಸಿ ಮಾತನಾಡಿದ ಯಕ್ಷಾಂಗಣ ಟ್ರಸ್ಟ್ನ ಕಲಾವಿದ ಲಂಬೋದರ ಹೆಗಡೆಯವರು ಚಪ್ಪಾಳೆಯ ಮೋಹವನ್ನು ಮರೆತಲ್ಲಿ ಮಾತ್ರ ನೈಜ ಕಲೆಯನ್ನು ಉಳಿಸಿ ಬೆಳೆಸಲು ಸಾಧ್ಯ. ಹಾಗಾಗಿ ನೋಡುವ ಪ್ರೇಕ್ಷಕನೂ ಕಲಾವಿದನಾಗಿರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೈಲಾಸ ಕಲಾ ಕ್ಷೇತ್ರದ ಅಧ್ಯಕ್ಷರಾದ ಶ್ರೀಯುತ ಕೊಯಿಕೂರು ಸೀತಾರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಭಾಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿಯವರು ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಾಗಬಾರದು ಎನ್ನುವ ಕಳಕಳಿಯನ್ನು ವ್ಯಕ್ತ ಪಡಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನು ಮತ್ಯಾಡಿ ಚಂದ್ರಶೇಖರ ಶೆಟ್ಟಿ ನಿರ್ವಹಿಸಿದರು.
ಕಾರ್ಯಕ್ರಮದ ತರುವಾಯ ಯಕ್ಷಾಂಗಣ ಟ್ರಸ್ಟ್ ಇವರಿಂದ ರುಕ್ಮಿಣಿ ಸ್ವಯಂವರ ಎನ್ನುವ ಸುಂದರ ಯಕ್ಷಗಾನ ಕಥಾನಕ ಪ್ರದರ್ಶನಗೊಂಡಿತು. ಕಲಾವಿದರಾಗಿ ಲಂಬೋದರ ಹೆಗಡೆ, ಗಣಪತಿ ಭಟ್, ಶಿವಾನಂದ ಕೋಟ, ಮಾದವ ಮಣೂರು,ದೇವರಾಜ್ದಾಸ್, ಸುಜಯೀಂದ್ರ ಹಂದೆ, ಕಡಬಾಳು ಉದಯ ಹೆಗಡೆ, ಕಡ್ಲೆ ಗಣಪತಿ ಹೆಗಡೆ, ನವೀನ ಕೋಟ, ಉಪ್ಪುಂದ ಗಣೇಶ, ವಿಶ್ವನಾಥ ಶೆಟ್ಟಿ, ನರಸಿಂಹ ತುಂಗ, ಲಕ್ಮಣ ಇನ್ನಿತರರು ಪಾಲ್ಗೊಂಡರು.
|
|
|